ಹೌದು, ಅದೊಂದು ನಮ್ಮ ಮನಸ್ಸಿನ ವಿಚಿತ್ರ ಸ್ಥಿತಿ ಎನ್ನಬಹುದೇನೊ. ಬಯಸಿದ್ದು ಸಿಗದಿದ್ದಾಗ, ಬಯಸದ್ದು ನಡೆದಾಗ, ಬಯಸಿದವರು ದೂರಾದಾಗ ಹೀಗೆ ನಮ್ಮ 'ಬಯಕೆ'ಗಳಿಗೆ ವಿರುದ್ಧವಾಗಿ ಏನಾದರೂ ಆದಾಗ ಅಲ್ಲಿ ಪ್ರತ್ಯಕ್ಷ, ಈ ಒಂಟಿತನ. "ನನಗ್ಯಾರೂ ಇಲ್ಲ. ನನ್ನವರು ಯಾರೂ ನನ್ನನ್ನು care ಮಾಡೋಲ್ಲ. ಯಾಕಾದ್ರೂ ಇದೆಯೋ ಈ ಬಾಳು. . ." ಇತ್ಯಾದಿತ್ಯಾದಿಆಲೋಚನೆಗಳ ಬಳ್ಳಿ ಮನವನ್ನು ಬಿಗಿಯಾಗಿ ಆವರಿಸಿಬಿಡುತ್ತದೆ. ಬಿಡಿಸಿಕೊಳ್ಳುವುದು ತುಸು ಕಷ್ಟವೇ. ಆ ಸಮಯದಲ್ಲೆಲ್ಲ ಕಾಗದ, ಪೆನ್ನು ಹಿಡಿದು ಕೂರುತ್ತೇನೆ. ಮನಸ್ಸಿಗೆ ಬಂದದ್ದು ಕಾಗದದ ಮೇಲೆ ಗೀಚಾಗಿರುತ್ತದೆ. ಸುಮ್ಮನೆ ತರಲೆಯೆನಿಸಿ, ಕಸದ ಬುಟ್ಟಿಯಹೊಟ್ಟೆತುಂಬಿಸಿದವು ಅವೆಷ್ಟೋ. ಕೆಲವು ಮಾತ್ರ ನನಗೇ ಆಶ್ಚರ್ಯವಾಗುವಂತೆ ಮೂಡಿಬಂದದ್ದೂ ಇದೆ. ನೀವೂ ಮಾಡಿ ನೋಡಿ. ಆಕಹಿಭಾವಗಳೆಲ್ಲ ಬಿಳಿಹಾಳೆಯ ಮೇಲೆ ಎಳೆ ಎಳೆಯಾಗಿ ಬಿಡಿಸಿಕೊಂಡು ಮನಸ್ಸು ಹಗುರಾಗಿರುತ್ತದೆ.
ಹೀಗೇ ಬರೆದವುಗಳನ್ನು ಹಾಗೇ ಬ್ಲಾಗಿನ ಪುಟಗಳಲ್ಲಿ ಅಚ್ಚುಹಾಕಲು ಹೊರಟಿದ್ದೇನೆ, ನನ್ನ 'ಒಲವಿ'ನ ಸಾಂಗತ್ಯದೊಂದಿಗೆ.
ನನ್ನೊಲವಿನ ಸಲಹೆಯಂತೆ ಈ ಒಲವ ತೆರೆದೆ. ಆ ಒಲವಿಗೆ ಒಲವಿನ ಕಾಣಿಕೆಯಿದು. ಮನಸಿನೊಲುಮೆಗೆ ನಿಲುಕುವ ಭಾವಗಳ ಬರವಣಿಗೆಯಿದು. ಒಲುಮೆಯಿಂದ ಬರುತ್ತಾ ಇರಿ. ಈ ಒಲವ ಮರೆಯದಿರಿ.
No comments:
Post a Comment